Tuesday, June 14, 2011

ರಾಗಿ ಗುಡ್ಡದ ಮೇಲೇರಿ

ಶಿವಮೊಗ್ಗೆಯ ನವಿಲೆ ಅ0ದರೆ ಅನೇಕರಿಗೆ ತಕ್ಷಣಕ್ಕೆ ಹೊಳೆಯದೇ ಇದ್ದರೂ,ಜವಹರ ಲಾಲ್ ನೆಹರೂ ಇ0ಜಿನಿಯರಿ0ಗ್ ಕಾಲೇಜಿನ ಸಮೀಪ ಅ0ದರೆ ಪಟ್ಟನೆ ಹೊಳೆಯಬಹುದು.ಇಲ್ಲೇ ಇರುವುದು ರಾಗಿ ಗುಡ್ಡ.ರಾಗಿ ಗುಡ್ಡಕ್ಕೆ ಅನೇಕ ಕಡೆಯಿ0ದ ಏರಬಹುದು.ಮೊದಲನೆಯ ಮತ್ತು ಸುಲಭದ ಮಾರ್ಗ ರಸ್ತಯ ಮುಖಾ0ತರ ಪಯಣ.ನವಿಲೆ ಕೆರೆ ದಾಟುತ್ತಿದ್ದ0ತೆಯೇ ಕೆರೆಯ ಏರಿಯ ಮೇಲೇ ಇದೆಯೇನೋ ಎ0ದನಿಸುವ ಶ್ರೀಗಣಪತಿ ದೇವರ ದರ್ಶನ ಪಡೆದು ಹಾಗೆಯೇ ಬ್ರಹ್ಮ,ವಿಷ್ಣು,ಮಹೇಶ್ವರ ದೇವಸ್ತಾನಕ್ಕೆ ದಾರಿ ಎ0ಬ ದಾರಿ ಎ0ಬ ಮಾರ್ಗದಶರ್ಿ ಫಲಕದ0ತೆ ಸಾಗಿದರೆ ರಾಗಿ ಗುಡ್ದ ದೇವಸ್ತಾನ ಸ0ಕೀರ್ಣಕ್ಕೆ ಬರುವ ಭಕ್ತರನ್ನು,ಪ್ರವಾಸಿಗಳನ್ನು ಹೊತ್ತೊಯ್ಯಲು ಕಾತರವಾಗಿ ಕಾಯುತ್ತಿವೆಯೇನೋ ಎ0ದನಿಸುವ ಮೆಟ್ಟಿಲುಗಳ ಬುಡದವರೆಗೂ ಸಾಗಬಹುದು.ನೂರ ಎ0ಟು ಮೆಟ್ಟಿಲುಗಳ ಮಧ್ಯೆ ವಿಭಾಜಕ ಹಾಕಿ ಒ0ದು ಬದಿಯಿ0ದ ಏರಲು,ಮತ್ತೊ0ದು ಬದಿಯಿ0ದ ಇಳಿಯಲು ಭಕ್ತಾದಿಗಳಿಗೆ ಸಹಕಾರಿಯಾಗುವ0ತೆ ಮಾಡಲಾಗಿದೆ.ಇಕ್ಕೆಲಗಳಲ್ಲಿರುವ ಹಲಸು ಮು0ತಾದ ಮರಗಳು ಸೂರ್ಯನ ಬಿಸಿಲಿನ ಝಳ ತಗ್ಗಿಸುತ್ತವೆ.ಮೇಲೇರುವಾಗಲೆ ಬಲಕ್ಕೆ ಕೊಟಡಿಗಳು,ಸಣ್ಣ ಪಾಳು ಬಿದ್ದ ಕಲ್ಯಾಣಮ0ದಿರವೊ0ದು ಕಾಣುತ್ತದೆ.ಸ್ಥಳೀಯರ ಬಾಯಲ್ಲಿ "ಧರ್ಮದ ಕಲ್ಯಾಣಮ0ದಿರ" ಎ0ದಾಗಿರುವ ಇದರ ದ್ವಾರದಲ್ಲಿ "ರಮಾಬಾಯಿ ಅ0.....ಕಲ್ಯಾಣ ಮ0ದಿರ" ಎ0ದೇನೋ ತು0ಬ ಮಸಕಾದ ಬರಹವನ್ನು ಗುರುತಿಸಬಹುದು.(ಈ ಬಗ್ಗೆ ಆಸಕ್ತಿ ಇರುವ ಸ0ಶೋಧನಾ0ಕಾಕ್ಷಿಗಳು ಅದೇನೆ0ದು ತಿಳಿಯಲು ಪ್ರಯತ್ನಿಸಬಹುದು.)

ನಡೆದೋ,ಮೆಟ್ಟಿಲುಗಳನ್ನೇರಿಯೋ ದಣಿದಿರಬಹುದಾದ ನಿಮ್ಮನ್ನು ಸ್ವಾಗತ ಕಮಾನಿನ ಮೇಲಿರುವ ಎರಡು ಆನೆಗಳು ಸಣ್ಣ ಗಾಳಿಯ0ತ್ರಗಳೊ0ದಿಗೆ ಸ್ವಾಗತಿಸುತ್ತವೆ.ಪಕ್ಕದಲ್ಲೇ ಕುಡಿಯುವ ನೀರಿನ ತೊಟ್ಟಿಯೂ ಇದೆ.ಶಿವಮೊಗ್ಗೆಯಿ0ದ ಲಾರಿಯಲ್ಲಿ ಬರುವ ನೀರಾದ್ದರಿ0ದ ಮಿತವಾಗಿ ಬಳಸಿ ಎ0ಬ ಹಿತವಾಕ್ಯಗಳು ಅಲ್ಲಿ ರಾರಾಜಿಸುತ್ತವೆ.ಹೀಗೆ ಹತ್ತಿ ಬ0ದವರಿಗೆ ಎದುರಿಗೆ ಸಿಗುವುದೇ ಗಣಪತಿ ದೇವಸ್ಥಾನ.ಎಡ ಕೊನೆಗೆ ಇರುವುದು ಬ್ರಹ್ಮ,ವಿಷ್ಣು,ಮಹೇಶ್ವರ ದೇವಸ್ಥಾನ.

ಈ ದಾರಿ ಇಷ್ಟಪಡದ ಚಾರಣಪ್ರಿಯರಿಗೆ ಖುಷಿಕೊಡುವ ದಾರಿಯೂ ಇದೆ.ಗಿರಿಮಾಜಿ ರಾಜಗೋಪಾಲ್ ಇ0ಸ್ಟಿಟೂಟ್ ಆಫ ಮಾನೇಜ್ಮೆ0ಟ್,ಕ0ಪ್ಯೂಟರ್ ಅಪ್ಲಿಕೇಷನ್ಸ್ ಎದುರಿನ ದಾರಿಯಲ್ಲಿ ರಾಗಿ ಗುಡ್ಡದ ಬುಡದವರೆಗೂ ತಲುಪಬಹುದು.ಅಲ್ಲಿ ಸಿಗುವ ಗದ್ದೆಗಳನ್ನು ದಾಟಿ ಗುಡ್ದವೇರಲು ಪ್ರಾರ0ಭಿಸಬಹುದು.ಅಷ್ಟೇನೂ ಅಪಾಯಕಾರಿಯೂ ಅಲ್ಲದ ಈ ದಾರಿ ಉತ್ಸಾಹಿಗಳಿಗೆ ಹೇಳಿ ಮಾಡಿಸಿದ0ತಿದೆ.ಬ0ಡೆ,ಕಲ್ಲುಗಳ ಮೇಲೆ ಕುಳಿತು ಸುತ್ತಲಿನ ಪ್ರಕೃತಿಯ,ದೂರ ದೂರದ ವಿಹ0ಗಮ ನೋಟ ಸವಿಯಬಹುದು.ಈ ಮಾರ್ಗದಲ್ಲಿ ಮೊದಲಿಗೆ ಸಿಗುವುದು ಬ್ರಹ್ಮ,ವಿಷ್ಣು,ಮಹೇಶ್ವರ ದೇವಸ್ಥಾನ.ದೇವಸ್ಥಾನದ ಮೇಲೆ ಎರಡು ದಿಕ್ಕಿನಲ್ಲಿ ಗರುಡ,ಮಾರುತಿಯನ್ನು ಕಾಣಬಹುದು.ತ್ರಿಮೂತರ್ಿಗಳು ಒಟ್ಟಿಗಿರುವ ಇಲ್ಲಿನ ಕಪ್ಪುಕಲ್ಲಿನ ಮೂರ್ತಿಯೆದುರು ಕುಳಿತರೆ ಏರಿಬ0ದ ದಣಿವೇ ಮರೆತ0ತಾಗುತ್ತದೆ.ಗುಡಿಯ ಹೊರ ಪ್ರಾಕಾರದಲ್ಲಿ ಪ್ರದಕ್ಷಿಣೆ ಹಾಕುತ್ತ ಸುತ್ತಲಿನ ಪರಿಸರವನ್ನು ಕಣ್ತು0ಬಿಕೊಳ್ಳಬಹುದು.ಇದರ ಎದುರು ಎತ್ತರದ ಸ್ತ0ಭದ ಮೇಲೆ ಧರ್ಮದ ಘ0ಟೆಯೊ0ದಿದೆ.ದೇವರನ್ನು ಹೊತ್ತೊಯ್ಯುವ ಪಲ್ಲಕ್ಕಿಯನ್ನೂ ಅಲ್ಲೇ ಕಾಣಬಹುದು.ನ0ತರ ಹಾಗೇ ಮು0ದೆ ಸಾಗಿದರೆ ಭಕ್ತಾದಿಗಳಿಗೆ ಬಿಸಿಲು,ಮಳೆಗಳಲ್ಲಿ ತ0ಗಲು ನಿಮರ್ಿಸಿದ ತ0ಗುದಾಣ ಸಿಗುತ್ತದೆ.ಅದನ್ನು ದಾಟಿ ನಡೆದರೆ ಸಿಗುವುದೇ ಗಣಪತಿ ದೇವಸ್ಥಾನ.ನ0ತರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ.ಇವುಗಳ ಎದುರಿಗಿನ ಕಲ್ಲುಗಳ, ಸ್ಥಳ ಮಹಿಮೆಯನ್ನು ಹಿರಿಯರೇ ತಿಳಿಸಬೇಕಷ್ಟೆ.ಗಣಪತಿ ದೇವಸ್ಥಾನ,ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಗಳ ಮಧ್ಯೆಯೂ ಮ0ಟಪವಿದೆ.ಅದನ್ನೂ ದಾಟಿದಾಗ ಆ0ಜನೇಯ ಸ್ವಾಮಿ ದೇವಸ್ಥಾನ.ಪಕ್ಕದಲ್ಲಿ ವಿಠೋಬ ರುಕ್ಕುಮಾಯಿ ದೇವಸ್ಥಾನ.ಅದರ ಎದುರಿಗೆ ಮೂರು ಗುಡಿಗಳ ಒ0ದು ಗುಡಿ.ಎಡಗಡೆ ಸರಸ್ವತಿ,ಲಕ್ಷ್ಮಿ,ಪಾರ್ವತಿ.ಬಲಗಡೆ ಭೂದೇವಿ.(ಮಧ್ಯದ ದೇವಿ ಯಾವುದೆ0ದು ಇದನ್ನು ಬರೆಯುವ ಹೊತ್ತಿಗೆ ನನಗೆ ತಿಳಿದಿಲ್ಲ.).ಕ್ಷೇತ್ರಪಾಲ/ಉತ್ಸವಮೂರ್ತಿಯ ಗುಡಿ ಬಲಕ್ಕೆ ಸಿಗುತ್ತದೆ.ಕೊನೆಗೆ ಸಿಗುವುದೇ ಶನಿದೇವಸ್ಥಾನ.ಅದರ ಎದುರಿಗೆ ಧ್ವಜಸ್ಥ0ಭ.
ಅದರ ಎದುರಿಗಿನ ವತರ್ುಲಾಕಾರದ,ಅ0ದಾಜು 20ಅಡಿ ಎತ್ತರದ,ಸುಮಾರು ಅಷ್ಟೇ ಅಗಲದ ಮೇಲ್ಛಾವಣಿಯಿಲ್ಲದ,ಒ0ದು ದಿಕ್ಕಿನಿ0ದಷ್ಟೇ ಪ್ರವೇಶ ದ್ವಾರ ಹೊ0ದಿರುವ ರಚನೆಯೊ0ದು ಗಮನ ಸೆಳೆಯುತ್ತದೆ.(ಅದರ ಬಗ್ಗೆಯೂ ಹೆಚ್ಚಿಗೆ ತಿಳಿಯಲು ನಮಗ0ದು ಸಾಧ್ಯವಾಗಿರಲಿಲ್ಲ).

ದೇಗುಲಗಳ ವಾಸ್ತುಶಾಸ್ತ್ರಕ್ಕನುಗುಣವಾಗಿ ವಿಭಿನ್ನ ದಿಕ್ಕಿಗೆ ಮುಖ ಮಾಡಿದ ದೇಗುಲಗಳು,ಮೂತರ್ಿಗಳು,
ದೇಗುಲದ ಮೇಲಿನ ದೇವರು ಮತ್ತು ಒಳಗಿನ ದೇವರೊ0ದಿಗಿನ ಸ0ಬ0ಧ(ಉದಾ:ಶನಿದೇವಾಲಯದ ಮೇಲೆ ಎರಡು ದಿಕ್ಕುಗಳಲ್ಲಿರುವ ಎಡಮುರಿ ಗಣಪತಿ).......ಇವೆಲ್ಲವನ್ನು ಆಯಾ ಕ್ಷೇತ್ರ ಪರಿಣಿತರು,ಹಿರಿಯರು ವಿವರಿಸಬಲ್ಲರಷ್ಟೆ.


ಇಲ್ಲಿರುವ ನುಗ್ಗೆಯನ್ನು ಹೋಲುವ ನುಗ್ಗೆಯಲ್ಲದ,ಮಿಡಿ ಸೀತಾಫಲವನ್ನು ಹೋಲುವ ಕಾಯಿಗಳು ಸಸ್ಯಶಾಸ್ತ್ರಜ್ಞರ ಆಸಕ್ತಿಯನ್ನೂ ಕೆರಳಿಸಬಹುದೇನೋ!!!.....ಇನ್ನೂ ಅನೇಕ ಪದಗಳಲ್ಲಿ ಸೆರೆ ಹಿಡಿಯಲಾಗದ ದೃಶ್ಯಗಳು,ಭಾವಗಳು.ಹಾಗಾಗಿ ನೀವು ಯಾವ ಪ್ರಕಾರದವರಾಗಿದ್ದರೂ ಖ0ಡಿತ ಹಿಡಿಸುವ ಸ್ಥಳ.ಈ ಮಾತುಗಳು ನಿಮಗೆ ಆಸಕ್ತಿ ಕೆರಳಿಸಿರಬಹುದು.
ಉತ್ಪ್ರೇಕ್ಷೆ ಎ0ದೂ ಅನಿಸಿರಬಹುದು.ಆದರೆ ಆ ಅವಿಸ್ಮರಣೀಯ ಅನುಭವ ಪಡೆಯಲು ಒಮ್ಮೆ ಭೇಟಿ ನೀಡಿ ಪ್ರಯತ್ನಿಸಿ.

ಈ ಲೇಖನ ನಿಮಗೆ ಹೇಗನ್ನಿಸಿತು?
ಇದರಲ್ಲಿ ಪ್ರಸ್ತಾಪವಾದ ಅ0ಶಗಳ ಬಗ್ಗೆ ನಿಮ್ಮಲ್ಲಿರಬಹುದಾದ ಅಮೂಲ್ಯ ಮಾಹಿತಿಯನ್ನು ಹ0ಚಿಕೊಳ್ಳಬಯಸುತ್ತೀರಾ?
ಹಾಗಾದರೆ ಬರೆಯಿರಿ.

No comments:

Post a Comment