Saturday, October 22, 2011

ಯಂಗಳ ಚಿತ್ರದುರ್ಗ ಟ್ರಿಪ್: ಭಾಗ -೧

ಯಂಗಳ ಚಿತ್ರದುರ್ಗ ಟ್ರಿಪ್: ಭಾಗ -೧
ಕ್ಯಾಂಪಸ್ ಸೆಲೆಕ್ಷನ್ ಆದ್ರೂ ಜಾಯ್ನ ಆಗದು ಸ್ವಲ್ಪ ಲೇಟಿತ್ತು. ಮನೇಲೆ ಕೂತು ಕೂತು ಬೋರು ಹೊಡೀತಿದ್ದ ಟೈಮಲ್ಲಿ ಗೆಳೆಯ ಆದರ್ಶನ ಮೆಸೇಜು ಬಂತು ಒಂದಿನ. ದಿನಾ ಮೆಸೇಜು ಬತ್ತು, ಅರ್ದಲ್ಲೆಂತೂ ವಿಶೇಷ ಇರ್ತು ಹೇಳ್ತ್ರಾ? ಅವತ್ತಿಂದ ಸ್ವಲ್ಪ ಪೆಸೆಲ್ಲೇ ಇತ್ತು :-) ಯಂಗ ಟಿ.ಸಿ.ಎಸ್ಸೋರು ಎತ್ಲಾಗಾರೂ ಟ್ರಿಪ್ ಹೋಗನನಾ ಅಂದ ಅವ..ನಂಗ ಬೇಕಾಗಿದ್ದು ಪಾಯಸ ಅವ ಬಡ್ಸಿದ್ದೂ ಪಾಯ್ಸ ಅಂದಗಾತು. ಹೋ ಜೈ ಅಂದಿ.ಬೇರೆ ಅವ್ಕೆಲ್ಲಾ ಕೇಳು, ಯಾವತ್ತು ಎಲ್ಲಿಗೆ ಹೇಳಿ ಆಮೇಲೆ ಹೇಳು ಅಂದಿ.ಫಸ್ಟಿಗೆ ಸೈ ಅಂದವ್ವೆಲ್ಲಾ ಕೈ ಕೊಟ್ಟು ಕೊನಿಗೆ ಜೈ ಅಂದವ್ವು ೪ ಜನ ಉಳ್ಕಂಡ್ಯ. ನನ್ನ ಫ್ರೆಂಡೊಬ್ಬಂಗೆ ಕೇಳ್ದಾಗ ಅವ್ನೂ ಬತ್ತಿ ಅಂದ.ಸರಿ ಹೇಳಿ ಹೊಂಟ್ಯಾ ಹೇಳಾತು..ಕಲ್ಲಿನಕೋಟೆ ದುರ್ಗಕ್ಕೆ..

ಬೆಳಿಗ್ಗೆ ಐದೂವರೆಗೆ ಬಸ್ಟ್ಯಾಂಡಲ್ಲಿರಿ ೫:೪೫ ಕ್ಕೆ ಬಸ್ಸು ಹೇಳಿ ಮೆಸೇಜಾಕಿತ್ತು. ಎಲ್ಲ ಸ್ವಲ್ಪ ಹೆಚ್ಚು ಕಮ್ಮಿ ಅಷ್ಟೊತ್ಗೆ ರೆಡಿ. ಬಸ್ಸಲ್ಲೆಲ್ಲಾ ಫುಲ್ಲು ಕಾಮಿಡಿ ಮಾಡ್ಕ್ಯಂಡು, ಕಿಟಕೀಲಿ ಕಾಣೋ ಸೂರ್ಯೋದಯ ಎಲ್ಲ ಕ್ಯಾಮರಾದಲ್ಲಿ ತೆಕ್ಕತಾ ಹೊಂಟ್ಯ. ಹಂಗೆ ಹೋಗಿ, ಹಿಂಗೆ ಹೋಗಿ ಹೇಳಿ ಬಸ್ಸಲ್ಲಿದ್ದ ಮೂರು ಜನರು ಪ್ರತ್ಯೇಕ ಉಪದೇಶ ಮಾಡ್ದ. ಮಧ್ಯೆ ದಾರೀಲಿ ಸಿಕ್ಕಿದ್ದ ದುರ್ಗದ ಡಿಪ್ಲೋಮ ಕಾಲೇಜು ಹುಡುಗ್ರೂ ಪ್ರೆಂಡ್ಸಾಗಿ ಒಳ್ಳೆ ಟೈಂಪಾಸಾತು.ಬಸ್ಸಲ್ಲಿ ಸಿಕ್ಕ ಚಿಳ್ಳೆ ಪಿಳ್ಳೆಗಳೆಲ್ಲಾ ಅಂಕಲ್ ಹೇಳದು ಕೇಳಿ ಕೇಳಿ ಬೇಜಾರಾಗಿ ಹೋಗಿತ್ತು . ಅವತ್ತು ಅವ್ರ ಬಾಯಲ್ಲಿ ಅಣ್ಣಾ ಹೇಳಿಸ್ಕ್ಯಂಡಿದ್ದೂ ಭರ್ಜರಿ ಖುಷಿ ಆತು.:-) ಚಿತ್ರದುರ್ಗದತ್ರ ಚೆಂದವಳ್ಳಿಯ ತೋಟ ಹೇಳಿದ್ದು. ಪೇಟೆಯಿಂದ ೨-೩ ಕಿ.ಮೀ ಆಗ್ತು. ಅಲ್ಲಿಂದಲೂ ದುರ್ಗದ ಕೋಟೆಗೆ ಹತ್ತಕ್ಕೆ ದಾರಿ ಇದ್ದಡ.ನಾವು ಕೋಟೆಲಿ ಭಯಂಕರ ನೋಡದಿತ್ರಲಾ ಹಂಗಾಗಿ ಅಲ್ಗೇ ಮೊದ್ಲು ಹೋಗ್ಬಂದು ಬಿಡನ ಅಂತ ಅಲ್ಲಿಗೆ ಆಟೋದಲ್ಲಿ ಹೊಂಟ್ಯ. ಆದ್ರೆ ಕೋಟೆಗೆ ಹೋದ್ಮೇಲೆ ಕಾಲೆಲ್ಲಾ ಭಯಂಕರ ನೋಯ್ತಿರತ್ತೆ, ಆಮೇಲೆಲ್ಲಿಗೂ ಹೋಗಕ್ಕಾಗಲ್ಲ ಮೊದ್ಲು ತೋಟಕ್ಕೆ ಹೋಗ್ಬನ್ನಿ ಸಾಮಿ ಅಂದ ಆಟೋದ ಸ್ವಾಮಿ. ಮಾಲೆ ಹಾಕಿದ ಅಯ್ಯಪ್ಪ ಸ್ವಾಮಿ ಸುಳ್ಳೇಳ್ತಲ್ಲೆ ಹೇಳಿ ಅಲ್ಲಿಗೆ ತಿರುಗ್ಸಿ ಸ್ವಾಮಿ ಅಂತ ಅಲ್ಲಿಗೆ ಹೋದ್ಯ. ಚೆಂದವಳ್ಳಿ ತೋಟದ ಮುಖ್ಯ ಆಕರ್ಷಣೆ ಗುಹೆ. ಅದು ನೆಲದಿಂದ ೮೫ ಅಡಿ ಕೆಳಕ್ಕೆ ಹೋಗತ್ತೆ. ಅದ್ನ ನೋಡಕ್ಕೆ ಮರಿಬೇಡಿ ಹೇಳಿ ಬಸ್ಸಲ್ಲಿ ಹೇಳಿದ್ದ. ಅದಲ್ದೇ ಅಲ್ಲಿ ಒಂದು ಕೆರೆ ಇದ್ದು. ಸಸ್ಯವನ ಇದ್ದು. ಒಂದು ದೇವಸ್ಥಾನ,ದುರ್ಗ ಅಂದ್ಮೇಲೆ ಕೇಳಕ್ಕಾ, ಭಯಂಕರ ಬೆಟ್ಟ, ಭರ್ಜರಿ ಬೇರೆ ಬೇರೆ ಆಕಾರದ ಕಲ್ಲು, ಒಂದು ಪಾರ್ಕು ಇತ್ಯಾದಿ ಇತ್ಯಾದಿ.ಅಲ್ಲಿ ಪ್ರವೇಶದ ಹತ್ರನೇ ಮೇಲಿರೋ ಅಮ್ಮ ಮಗೂನ ಎತ್ಕಂಡಂಗಿರೋ ಕಲ್ಲು ಇಷ್ಟ ಆತು. ಆದಿ ಕಾಣ್ತು, ಮದರ್ ತೆರೇಸಾ ಇದ್ದಂಗೆ ಇದ್ದು ಅದು ಹೇಳ್ತಿದ್ದ :-)



ಸರಿ ಗುಹೆ ನೋಡನಾ ಹೇಳಿ ಹೊಂಟ್ಯ. ಅಲ್ಲಿ ಭಯಂಕರ ಕತ್ಲು. ಎಂತೆಂತೂ ಕಾಣದಿಲ್ಲೆ. ಬ್ಯಾಟ್ರಿ ಬೇಕೇ ಬೇಕು ಒಳಗೆ ಹೋಗಕ್ಕೆ ಅಂತ ಬಸ್ಸಲ್ಲಿ ಹೇಳಿದ್ದ. ಹಿಂದಿನ ದಿನ ಬ್ಯಾಟ್ರಿ ತಗಂಬರ್ರಾ ಹೇಳಿ ಮೆಸೇಜು ಹಾಕಿದ್ರೆ ಯಾರೂ ಬ್ಯಾಟ್ರಿನೇ ತರ್ಲಾಗ್ದಾ? ಹಾಕಿದ ತಪ್ಪಿಗೆ ಆ ಒಬ್ನೆ ತಂದಿದ್ದಾಗಿತ್ತು:-) ಗುಹೆಗೆ ಹೋಗ ದಾರೀಲಿ ಇಬ್ರು ಸ್ವಲ್ಪ ವಯಸ್ಸಾದವ್ವು ಇದ್ದಿದ್ದ ಬ್ಯಾಟ್ರಿ ಹಿಡ್ಕಂಡು.ಹೆ ಹೆ.. ಬ್ಯಾಟ್ರಿ ಮಾರವ್ರಲ್ಲ ಅವ್ವು. ಗುಹೆ ತೋರ್ಸವ್ವು.ಅಲ್ಲಿ ಒಂದೇ ತರದ ಸುಮಾರು ಬಾಗ್ಲಿದೆ. ನಾವು ಬರ್ದೇ ಹೋದ್ರೆ ನೀವು ಒಳಗೇ ಕಳ್ದು ಹೋಗ್ತೀರಿ. ನಾವು ಬಂದು ತೋರ್ಸಕ್ಕೆ ತಲೆಗಿಪ್ಪತ್ತು ಕೊಡ್ಬೇಕು ಅಂದ. ಅಂತೂ ಚೌಕಾಸಿ ವ್ಯವಹಾರ ಮಾಡಿ ಮಂಡಿಗದ್ನೈದು ರುಪಾಯ್ಗೆ ಒಪ್ಸಿದ್ಯ.ಅಲ್ಲಿ ಇನ್ನೂ ಒಂದು ಮೂರ್ನಾಲ್ಕು ಕುಟುಂಬದ್ವ್ವು ಬಂದಿದ್ದ. ಮಕ್ಳು ಮರಿ ಕಟ್ಕಂಡು. ಅವ್ವು ಶಿಮೋಗದವ್ವೇ.. ಆದ್ರೆ ನಂಗಕ್ಕೆ ಅಲ್ಲಿ ಹೋದ್ಮೇಲೆ ಗೊತ್ತಾತು. ಚೇ.. ಸರಿ , ಅಲ್ಲೇ ಇದ್ದ ಈಶ್ವರ ದೇವಸ್ಥಾನಕ್ಕೋಗಿ ನಮಸ್ಕಾರ ಮಾಡಿ ಗುಹೆ ಒಳಗೆ ಇಳ್ಯಕ್ಕೆ ಹೊಂಟ್ಯ.






ತಾವಿಲ್ದೇ ಯಾರೂ ಒಳಗೆ ಹೋಗ್ಲಾಗ ಹೇಳಿ ಬಾಗ್ಲಿಗೆ ಬೀಗ ಹಾಕಿಟ್ಟಿದ ಪುಣ್ಯಾತ್ಮ :-) ಗುಹೆ ಸುರಕ್ಷತೆ ದೃಷ್ಟಿಂದ್ಲೂ ಅದು ಒಳ್ಳೇದೆಯ ಬಿಡಿ. ನಂದೂ ಒಂದು ಬ್ಯಾಟ್ರಿ ಇದ್ದಿದ್ದಿದು ಭಾರಿ ಒಳ್ಳೇದಾತು.ಅಲ್ಲಿ ಫುಲ್ಲು ಕತ್ಲೆ. ಒಂದೇ ಒಂದು ಬೆಳಕಿನ ಕಿರಣ ಬತಲೆ.






ಮೊದಲು ಸಿಕ್ಕಿದ್ದು ಬಸವನ ಬಾಗಿಲು ಅಥವಾ ನಂದಿ ದ್ವಾರ.ಅದಕ್ಕೆ ಏಳು ಮೆಟ್ಲು.ಅದು ಇಳೀತಿದ್ದಂಗೆ ವಿಶ್ರಾಂತಿ ಪೀಠ ಹೇಳಿ ಸಿಕ್ತು. ಅಂದ್ರೆ, ಇಲ್ಲಿ ಆಗಿನ ಕಾಲದ ಗುರುಗಳು, ಅವರ ಪಾಠಶಾಲೆ ಎಲ್ಲ ಇತ್ತಡ. ಗುರುಗಳ್ನ ನೋಡಕ್ಕೆ ಯಾರಾದ್ರೂ ಬಂದ ಅಂದ್ರೆ ಅವ್ರು ನೇರ ಒಳಗೆ ನುಗ್ತಿರ್ಲೆ. ವಿಶ್ರಾಂತಿ ಪೀಠದಲ್ಲಿ ಕೂತು ಗುರುಗಳಿಂದ ಬನ್ನಿ ಹೇಳಿ ಅಪ್ಪಣೆ ಸಿಕ್ಕಿದ ಮೇಲೆ ಒಳಗೆ ಹೋಗ್ತಿದ್ವಡ.






ಆಮೇಲೆ ಸಿಕ್ಕಿದ್ದು ಸಿಂಹ ದ್ವಾರ. ಅದಕ್ಕೆ ೯ ಮೆಟ್ಲು.ಅದರತ್ರನೇ ಆಗಿನ ಕಾಲದ ಜೈನರು, ಕದಂಬರು, ಚೋಳರು ಅಲ್ಲಿಗೆ ಬಂದಿದ್ದ ಹೇಳದಕ್ಕೆ ಅವ್ರು ಕೆತ್ತಿದ ರಚನೇನ ತೋರ್ಸಿದ ಗೈಡು.ಗುರುಗಳ ಪೂಜಾಪೀಠ, ಅವ್ರ ಧ್ಯಾನ ಪೀಠ ಎಲ್ಲಾ ತೋರ್ಸಿದ.
















ಅಲ್ಲೇ ಆಗಿನ ಕಾಲದ ಸ್ನಾನದ ತೊಟ್ಟಿ ತೋರ್ಸಿದ.ಆಶ್ಚರ್ಯ ಅಂದ್ರೆ ಆಗಿನ ಕಾಲದಲ್ಲೇ ಮಳೆಕೊಯ್ಲಿನ ಕಲ್ಪನೆ ಇತ್ತು ಅವಕ್ಕೆ ಹೇಳದು. ಬೆಟ್ಟದ ಮೇಲೆ ಸುರಿದ ಮಳೆ ನೀಟಾಗಿ ತೊಟ್ಟಿಗೆ ಗುಹೆ ಗೋಡೆ ಒಳಗಿಂದ ಇಳಿದು ಬರೋ ವ್ಯವಸ್ಥೆಮಾಡಿದ್ದ. ಹೆಮ್ಮೆ ಆತು ಯಂಗಳ ಪೂರ್ವಜ್ರ ಬಗ್ಗೆ ಇನ್ನೊಂದ್ಸಲ.


ಅಲ್ಲಿ ಗುರುಕುಲದಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಕ್ಕೆ ಕೂತ್ರಿದ್ದ ಜಾಗ ಎಲ್ಲ ತೋರ್ಸಿದ. ಫುಲ್ಲು ಕತ್ಲೆ ಅಲ. ಹಂಗಾಗಿ ಎಲ್ಲಿ ನೋಡಿದ್ರೂ ದೀಪ ಇಡೋ ಜಾಗಗಳು. ಅದ್ನ ಗೈಡು ಹೇಳಿ ತೋರ್ಸೋವರ್ಗೆ ಯಂಗಕ್ಕೆ ಅಂದಾಜೇ ಆಗಿರ್ಲೆ. ಎಲ್ಲಿ ತಲೀಗೆ ಗುಹೆ ಹೊಡೀತೋ , ಎಲ್ಲಿ ಕಾಲಿಡದೋ ಹೇಳಿ ಮೇಲೆ, ಕೆಳಗೆ ಬ್ಯಾಟ್ರಿ ಹೊಡೀತಾ ಹೋಗದೇ ಆಗಿತ್ತು ಹಂಗಾಗಿ.ಆವಾಗೇನೋ ಕರೆಂಟು ಇರ್ಲಿಲ್ಲ ದೀಪ ಇಟ್ಟಿದ್ರು, ಈಗ ಇಲ್ಲೆಲ್ಲಾ ಕರೆಂಟು ದೀಪ ಹಾಕ್ಬೋದಲ್ಲ ಅಂದ ಒಬ್ಬ ಪುಣ್ಯಾತ್ಮ. ಸಾರ್ ಹಂಗೆಲ್ಲಾ ಹಾಕಿದ್ರೆ ಇಲ್ಲಿನ ಪಾವಿತ್ರತೆ ಹೋಗಲ್ವಾ, ಅವಾಗ ಹೆಂಗೆ ಬದುಕ್ತಿದ್ರು ಅಂತ ನಿಮಗೆಲ್ಲಾ ಗೊತ್ತಾಗೋದು ಬೇಡ್ವಾ? ಅಂದ ಗೈಡು..ಹಿಂಗೂ ಇರುತ್ವಾ ಜನ ಅನುಸ್ತು.




       ಅಲ್ಲೆ ಒಂದ್ಕಡೆ ಗುಹೆಯೊಳಗೆ ಆಮ್ಲಜನಕ ಹೋಗೋಕೆ ಮಾಡಿರೋ ದಾರಿ ತೋರ್ಸಿದ ಗೈಡು. ಅಲ್ಲೆಲ್ಲ ಮತ್ತೆ ಕತ್ಲೆ. ಬಾವಲಿಗಳ ಸಾರ್ಮಾಜ್ಯ.ಆಮೇಲೆ ಸಿಕ್ಕಿದ್ದು ಗಜ ದ್ವಾರ. ಅದಕ್ಕೆ ೫ ಮೆಟ್ಲು. ಕೊನಿಗೆ ಗುಹೆಯ ಅತೀ ಆಳದ ಜಾಗಕ್ಕೆ ಕರ್ಕಂಡೋದ.


ಅದು ಸಭಾಮಂಟಪ ಅಡ.ಸ್ವಲ್ಪ ದೊಡ್ಡಕ್ಕಿದ್ದು.. ಕೆಲ್ವು ಕಡೆ ಎಲ್ಲ, ಕುತ್ಕಂಡು, ಬಗ್ಯಂಡು ಹೋಗಿದ್ಯ ಹೋಗಕ್ಕಿದ್ರೆ, ಹಂಗಾಗಿ ಇದು ಸುಮಾರು ದೊಡ್ಡ ಜಾಗನೇ. ಅಲ್ಲಿ ಶಸ್ತ್ರಾಸ್ತ್ರ ಇಡೋಕೆ ಜಾಗ, ಮತ್ತೆ ದೀಪದ ಜಾಗ ಹಿಂಗೆಲ್ಲಾ ಇತ್ತು.ಇಲ್ಲಿ ಎಷ್ಟು ಕತ್ಲು ಅಂತ ತಿಳೀಬೇಕಿದ್ರೆ ನಿಮ್ಮ ಬ್ಯಾಟ್ರಿ, ಮೊಬೈಲು ಬ್ಯಾಟ್ರಿ ಎಲ್ಲಾ ಆರ್ಸಿ ಅಂದ ಅವ. ಅಯ್ಯಪ್ಪಾ.. ಅಮವಾಸೆ ದಿನ ರಾತ್ರಿ ಕತ್ಲಲಲ್ಲಾದ್ರೂ ಎದ್ರಿಗೆ ನಿಂತೋರ ಮುಖ ಕಾಣ್ತಿಕ್ಕು. ಆದ್ರೆ ಅಲ್ಲಿ ಎಂತೂ ಇಲ್ಲೆ. ಭೂಮಿ ಇಂದ ೮೫ ಅಡಿ ಕೆಳಗೆ ಅಂದ್ರೆ ಸಾಮಾನ್ಯನಾ? ಆಮೇಲೆ ಸ್ವಲ್ಪ ಇತ್ಲಗೆ ಬಂದ್ಯ.ಇಷ್ಟೆಲ್ಲಾ ಬಾಗುಗಳ ಮಧ್ಯ ತಮ್ಗೆ ಬೇಕಾದ ಬಾಗ್ಲು ಇದೇಯ ಹೇಳಿ ಹೆಂಗೆ ಕಂಡು ಹಿಡೀತಿದ್ದ ಅವು, ಅತ್ವಾ ಈ ಗೈಡು ಹೇಳಿ ಯಂಗೆ ಡೌಟು ಬಂದಿತ್ತು. ಅಷ್ಟರಲ್ಲೇ ಆ ಗೈಡು ತೋರ್ಸಿದ. ಇಲ್ಲಿ ನೋಡಿ, ಈ ಬಾಗ್ಲಿಗೆ ನಕ್ಷತ್ರದ ಗುರ್ತು. ಇದಕ್ಕೆ ಬಾಣ.. ಹಿಂಗೆ ಪ್ರತಿಯೊಂದು ಬಾಗ್ಲಿಗೂ ಒಂದೊಂದು ಗುರ್ತು ಹೇಳಿ.





ಅಲ್ಲಿ ಇನ್ನೊಂದು ವಿಶೇಷ. ಅಲ್ಲಿ ಒಂದು ಕಿಂಡಿ ಇದ್ದು. ಅದ್ರಿಂದ ನೋಡಿದ್ರೆ ಮೇಲಿನ ಮೂರೂ ದ್ವಾರದ ಮೆಟ್ಲಿಂದ ಯಾರು ಬತ್ತ ಇದ್ದ ಹೇಳದು ಕಾಣ್ತು. ಆದ್ರೆ ಇಳೀತಿದ್ದವ್ಕೆ ಆ ಕಡಿಯಿಂದ ಯಾರಿದ್ದ ಹೇಳದು ಗೊತ್ತಾಗ್ತಿರ್ಲೆ. ಅವ್ರು ಯಾವ ದ್ವಾರದಲ್ಲಿ ಹೋಗದಪ ಹೇಳಿ ತಲೆ ಕೆಡಸ್ಕಳದ್ರೊಳಗೆ ಗುರುಗಳು ಅಲ್ಲೇ ಪಕ್ಕದಲ್ಲಿರೋ ರಹಸ್ಯ ದ್ವಾರದಿಂದ ತಪ್ಪಿಸ್ಕತ್ತಿದ್ವಡ.












 ಅಲ್ಲೇ ಪಕ್ಕದಲ್ಲಿ ನರಸಿಂಹ ಮೂರ್ತಿ ಹೇಳಿ ತೋರ್ಸಿದ ಗೈಡು. ಅದ್ರೆ ಪಾಪಿಗಳು ಅದ್ನ ಕೈಕಾಲೆಲ್ಲಾ ಮುರ್ದು ಹಾಳ್ಮಾಡ್ಬಿಟಿದ. ಗೈಡು ಹೇಳಿದ್ಮೇಲೆ ನಾವು ಆಕಾರ ಹುಡ್ಕೋ ಪರಿಸ್ಥಿತಿ..ವಿಗ್ರಹದ ಹಿಂದೆ ಚಿನ್ನ, ಬೆಳ್ಳಿ ಇಟ್ಟಿರ್ತ ಹೇಳಿ ಹಂಗೆ ಮಾಡಿದ್ವಡ..ಅದ್ರ ಪಕ್ಕದ ಕೋಣೇಲೆ ಆಗಿನ ಕಾಲದ ಚಿತ್ರಕಲೆ ಎಲ್ಲ ನೋಡಿ ನಮ್ಮ ಇತಿಹಾಸದ ಬುಕ್ಕಲ್ಲಿ ಅಜಂತಾ ಎಲ್ಲೋರ ಗುಹೇಲಿ ಹಂಗಿತ್ತು, ಹಿಂಗಿತ್ತು ಹೇಳೋ ಚಿತ್ರ ನೋಡಿದ್ದು ನೆನ್ಪಾತು




ಅದಾದ್ಮೇಲೆ ಅವ್ರು ಮಲ್ಗುತಿದ್ದ ಕಲ್ಲಿನ ಕಟ್ಟೆ ತೋರ್ಸಿದ. ಅಲ್ಲೇ ಬಲಗಡೆ ಇನ್ನೊಂದು ಬಾಗ್ಲು, ನೇರಕ್ಕೊಂದು, ಎಡಕ್ಕೊಂದು. ಎಡಗಡೇದು ಸ್ವಲ್ಪ ಸಣ್ಣಕ್ಕಿದ್ದು, ಅದ್ರಲ್ಲಿ ಹೋದ್ರೆ ಎಲ್ಲಿಗೂ ಹೋಗ್ತಲ್ಲೆ, ಸ್ವಲ್ಪ ದೂರ ಹೋದ್ಮೇಲೆ ದಾರಿ ಕಾಣ್ತಲ್ಲೆ. ಮುಂದೆ ಕಾಲಿಟ್ರೆ ಗುಂಡಿ. ಅದು ಗೊತ್ತಿಲ್ದೇ ಹೋದ್ರೆ ಅಲ್ಲೇ ಟ್ರಾಪ್..

 ಈ ತರದ್ದು ಸುಮಾರು ಇದ್ದಡ. ಬಲಕ್ಕೆ ಇನ್ನೊಂದು ಅಂದ್ನಲ, ಅಲ್ಲಿ ರಾಜಭಟರೆಲ್ಲಾ ಇರ್ತಿದ್ವಡ.. ಅವ್ರು ಓಡಾಡಕ್ಕೆ ಆ ದಾರಿ, ಗುರುಗಳದ್ದು ಈ ದಾರಿ.




ಹಂಗೆ ನೇರ ಹೋದ್ಯ. ಈಗ ಮತ್ತೆ ಮೇಲೆ ಹತ್ತದು ಶುರು ಆತು. ಅಲ್ಲಿ ಒಂದು ದೇವಸ್ಥಾನದ ತರ. ಅದರ ಚೋಳರ ಚೇಳಿನ ಚಿತ್ರ, ಕದಂಬರ ನವಿಲಿನ ಚಿತ್ರ ಎರಡೂ ಇತ್ತು . ಆದ್ರೆ ಒಳಗೆ ಎಂತೂ ಇರ್ಲೆ.. ಅದನ್ನೂ ಹಾಳು ಮಾಡಿಕ್ಕು ಪಾಪಿಗಳು. ಅಲ್ಲಿ ಮೇಲೆಲ್ಲಾ ಬಾವಲಿ.ಬಾವಲಿ ಹಿಕ್ಕೆ ವಾಸ್ನೆಗೋ , ಅತ್ವಾ ಭೂಮಿಯಿಂದ ಅಷ್ಟು ಕೆಳಗೆ ಇಳ್ದಿದ್ದಕ್ಕೊ ಎಂತೋ ಗಂಟ್ಲೆಲ್ಲಾ ತುರ್ಸಿದಂಗೆ, ಉಸ್ರು ಕಟ್ದಂಗೆ ಆಗ್ತಿತ್ತು. ಒಬ್ಬಂಗೆ ಅದ್ರ ಫೋಟೋ ತಗ್ಯಕ್ಕು ಹೇಳಿ.


ಇನ್ನೊಬ್ಬ ಪ್ರೆಂಡು ಬ್ಯಾಟ್ರಿ ಅದಕ್ಕೆ ಮಾತ್ರ ಹೊಡ್ಯಡ ಮಾರಾಯ. ಎದ್ದು ಬತ್ತ ಹೇಳಿ ಹೆದ್ರತಿದ್ದ. ಅವ ಮಧ್ಯ ನಡ್ಯಕ್ಕಿದ್ರು ಸುಮಾರು ಸಲ "ಅಮ್ಮಾ, ಬಾವಲಿ!!" ಹೇಳೀ ಹೆದ್ರಕಂಡಿದ್ದ.. ಬೆಳಕಿಗೆ ಬಾವಲಿ ಬರೋಲ್ಲ ಹೆದ್ರಬೇಡಿ ಹೇಳಿ ಸಮಾಧಾನ ಮಾಡ್ದ ಗೈಡು. ಕೊನಿಗೆ ಹಂಗೇ ಮೇಲೆ ಹತ್ತಿದ್ಯ. ಅಲ್ಲಿ ಲಕ್ಷ್ಮಿ ವಿಗ್ರಹದ ಕಿಂಡಿ ಹಿಂಗೆ ಸುಮಾರು ದೇವನು ದೇವತೆಗಳು ಹತ್ತ ದಾರೀಲಿ ಬಲಗಡೆ ಗೋಡೆ ಮೇಲೆ ಇದ್ದಿದ್ದ. ಎಲ್ಲಾ ನೋಡ್ಕ್ಯಂಡು ಮೇಲೆ ಹತ್ತಿದ್ಯ. ಮೇಲೆ ಹತ್ತಕ್ಕಿದ್ರೆ ನಂದಿ ದ್ವಾರದತ್ರ ಬಂದಾಗ ಅವ ತೋರ್ಸಿದ. ನೋಡಿ, ಇದು , ನಾವು ಇಳಿದ ದಾರಿ, ಇದು ಹತ್ತಿದ್ದು ಹೇಳಿ. ಒಂದು ಪ್ರದಕ್ಷಿಣೆ ಹಾಕ್ದಂಗೆ ಆಗಿತ್ತು ನಂಗ..ಕೊನಿಗೆ ಅಂತೂ ಇಳ್ದ ಬಾಗ್ಲಿಗೆ ಬಂದ್ಯ.. ಬೆಳಕು ಕಾಣಕ್ಕಿಡಿತ್ತು. ತಾಜಾ ಗಾಳಿ.. ಅಬ್ಬಾ.. ಉಸ್ರು ಬಂದಂಗಾತು. ಗಾಳಿ ಮಹತ್ವ ಗೊತಾಗಿದ್ದು ಇವತ್ತೇಲೆ ಅಂದ ಫ್ರೆಂಡು. ಹೌದು ಅನುಸ್ತು.



ಅಲ್ಲಿ ಸಸ್ಯವನ,ಕೆರೆ ಎಲ್ಲ ನೋಡ್ಕಂಡು , ಮತ್ತೆ ವಾಪಾಸ್ ಬಂದ್ಯ. ಅಲ್ಲೇ ಮೇಲ್ಗಡೆ ನೂರಾ ಎಂಟು ಶಿವಲಿಂಗ ಇದ್ದಡ. ಅಲ್ಲಿ ಗೈಡು ಹೇಳ್ಲೆ. ನಂಗಕ್ಕೂ ವಾಪಾಸ್ ಬತ್ತಿರಕಿದ್ರೆ ಗೊತ್ತಾತು. ನಿಂಗ ಏನಾದ್ರೂ ಹೋದ್ರೆ ಹೋಗ್ಬನ್ನಿ..
(ಮುಂದೆ: ಭಾಗ-೨ : ಚಿತ್ರದುರ್ಗದ ಕಲ್ಲಿನ ಕೋಟೆ.. )

No comments:

Post a Comment