Saturday, December 3, 2011

ಬಿಡಿ ಬಿಡಿ

.
ಬಾಯೆಲ್ಲ ಉರಿ ಕಣ್ಣ ಸೇರಿತೆ ಖಾರ
ಅಮ್ಮನ ನೆನಪಾಯ್ತು ಇದ್ದೆಯಾ ದೇವರೇ
ಮೂಗೆಲ್ಲ ಒದ್ದೆ ಹೊಟ್ಟೆ ತಲುಪಿದ ನೀರು
ನೆನಪಾಯ್ತು ತಿಂದಿದ್ದು ಪಾನೀಪುರಿ

.
ವಿಪರೀತ ನಾಜೂಕು ಪೂರಿ
ಯಾಕೋ ಹೆಚ್ಚಾಗಿ ನಟನಾ ಮಸಾಲೆ
ಮನೆಗೆ ತಂದರೆ ಕಣ್ಣ ತುಂಬೆಲ್ಲ ನೀರು
ನೀರಲ್ಲೂ,ಚಳಿಯಲ್ಲೂ ಮರೆಯದಂತಾ ಬಿಸಿ

.
ಹಾದಿ ಬದಿ ಹಲರೋಗ
ಕಾಲರಾ ಕಾಮಾಲೆ ಎಂದು
ಭಾಷಣ ಬಿಗಿದಂದೇ ವಿಪರೀತ
ಕೆಂಪಾಗಿ ಕರೆದಿಹುದೆ ಚೆಂದ ಗೋಭಿ

No comments:

Post a Comment